Feb 26, 2015

ನನ್ನ ಬ್ಲಾಗ್ ಗಳ ವೀಕ್ಷಣಾ ವರದಿ

       ನನ್ನ ಬ್ಲಾಗ್ ಗಳನ್ನು ವೀಕ್ಷಿಸಿದ ಸಹೃದಯಿಗಳ ಸಂಖ್ಯೆ.  ದಿನಾಂಕ:25.02.2015ರವರೆಗೆ

Feb 23, 2015

ಕನ್ನಡ ಸಾಹಿತ್ಯ ಸಮ್ಮೇಳನಗಳು

ಈವರೆಗೆ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನಗಳು,ನಡೆದ ಸ್ಥಳ,ವರ್ಷ ಹಾಗೂ ಸಮ್ಮೇಳನಾಧ್ಯಕ್ಷರ ವಿವರ ಇಲ್ಲಿದೆ.
ಕ್ರ.ಸಂ. ಸಮ್ಮೇಳನದ ಸ್ಥಳ ನಡೆದ ವರ್ಷ ಸಮ್ಮೇಳನಾಧ್ಯಕ್ಷರು
1 ಬೆಂಗಳೂರು 1915 ಎಚ್.ವಿ.ನಂಜುಂಡಯ್ಯ
2 ಬೆಂಗಳೂರು 1916 ಎಚ್.ವಿ.ನಂಜುಂಡಯ್ಯ
3 ಮೈಸೂರು 1917 ಎಚ್.ವಿ.ನಂಜುಂಡಯ್ಯ
4 ಧಾರವಾಡ 1918 ಆರ್. ನರಸಿಂಹಾಚಾರ್
5 ಹಾಸನ 1919 ಕರ್ಪೂರ ಶ್ರೀನಿವಾಸರಾವ್
6 ಹೊಸಪೇಟೆ 1920 ರೊದ್ದ ಶ್ರೀನಿವಾಸರಾವ್
7 ಚಿಕ್ಕಮಗಳೂರು 1921 ಕೆ.ಪಿ.ಪಟ್ಟಣಶೆಟ್ಟಿ
8 ದಾವಣಗೆರೆ 1922 ಎಂ.ವೆಂಕಟಕೃಷ್ಣಯ್ಯ
9 ಬಿಜಾಪುರ 1923 ಸಿದ್ದಾಂತಿ ಶಿವಶಂಕರಶಾಸ್ತ್ರಿ
10 ಕೋಲಾರ 1924 ಹೊಸಕೋಟೆ ಕೃಷ್ಣಶಾಸ್ತ್ರೀ
11 ಬೆಳಗಾವಿ 1925 ಬೆನಗಲ್ ರಾಮರಾವ್
12 ಬಳ್ಳಾರಿ 1926 ಫ.ಗು.ಹಳಿಕಟ್ಟಿ
13 ಮಂಗಳೂರು 1927 ಆರ್. ತಾತಾ
14 ಗುಲ್ಬರ್ಗಾ 1928 ಬಿ.ಎಂ.ಶ್ರೀಕಂಠಯ್ಯ
15 ಬೆಳಗಾವಿ 1929 ಮಾಸ್ತಿ ವೆಂಕಟೇಶ ಅಯ್ಯಂಗಾರ್
16 ಮೈಸೂರು 1930 ಆಲೂರು ವೆಂಕಟರಾವ್
17 ಕಾರವಾರ 1931 ಮಳಲಿ ತಿಮ್ಮಪ್ಪಯ್ಯ
18 ಮಡಿಕೇರಿ 1932 ಡಿ.ವಿ.ಗುಂಡಪ್ಪ
19 ಹುಬ್ಬಳ್ಳಿ 1933 ವೈ.ನಾಗೇಶಶಾಸ್ತ್ರೀ
20 ರಾಯಚೂರು 1934 ಪಂಜೆ ಮಂಗೇಶರಾಯ
21 ಮುಂಬಯಿ 1935 ಎನ್.ಎಸ್.ಸುಬ್ಬರಾವ್
22 ಜಮಖಂಡಿ 1937 ಬೆಳ್ಳಾವೆ ವೆಂಕಟನಾರಣಪ್ಪ
23 ಬಳ್ಳಾರಿ 1938 ರಂ.ರಾ.ದಿವಾಕರ್
24 ಬೆಳಗಾವಿ 1939 ಮುದವೀಡು ಕೃಷ್ಣರಾವ್
25 ಧಾರವಾಡ 1940 ವೈ.ಚಂದ್ರಶೇಖರ ಶಾಸ್ತ್ರೀ
26 ಹೈದ್ರಾಬಾದ್ 1941 ಎ.ಆರ್. ಕೃಷ್ಣಶಾಸ್ತ್ರೀ
27 ಶಿವಮೊಗ್ಗ 1943 ದ.ರಾ.ಬೇಂದ್ರೆ
28 ರಬಕವಿ 1944 ಎಸ್.ಎಸ್. ಬಸವನಾಳ
29 ಮದರಾಸು 1945 ಟಿ.ಪಿ.ಕೈಲಾಸಂ
30 ಹರಪನಹಳ್ಳಿ 1947 ಸಿ.ಕೆ. ವೆಂಕಟರಾಮಯ್ಯ
31 ಕಾಸರಗೋಡು 1948 ತಿರುಮಲೆ ತಾತಾಚಾರ್ಯ ಶರ್ಮಾ
32 ಗುಲ್ಬರ್ಗಾ 1949 ಉತ್ತಂಗಿ ಚೆನ್ನಪ್ಪ
33 ಸೊಲ್ಲಾಪುರ 1950 ಎಂ.ಆರ್.ಶ್ರೀನಿವಾಸಮೂರ್ತಿ
34 ಮುಂಬಯಿ 1951 ಎಂ.ಗೋವಿಂದಪೈ
35 ಬೇಲೂರು 1952 ಎಸ್.ಸಿ.ನಂದಿಮಠ
36 ಕುಮಟ 1954 ವಿ.ಸೀತಾರಾಮಯ್ಯ
37 ಮೈಸೂರು 1955 ಶಿವರಾಮಕಾರಂತ್
38 ಬೆಂಗಳೂರು 1955* ರಾಯಚೂರು
39 ಧಾರವಾಡ 1957 ಕೆ.ವಿ.ಪುಟ್ಟಪ್ಪ
40 ಬಳ್ಳಾರಿ 1958 ವಿ.ಕೃ.ಗೋಕಾಕ್
41 ಬೀದರ್ 1960 ಡಿ.ಎಲ್.ನರಸಿಂಹಾಚಾರ್
42 ಮಣಿಪಾಲ 1960 ಅ.ನ.ಕೃಷ್ಣರಾವ್
43 ಗದಗ 1961 ಕೆ.ಜಿ.ಕುಂದಣಗಾರ
44 ಸಿದ್ಧಗಂಗಾ 1963 ರಂ.ಶ್ರೀ.ಮುಗಳಿ
45 ಕಾರವಾರ 1923 ಕಡೆಂಗೋಡ್ಲು ಶಂಕರಭಟ್ಟ
46 ಕಡೆಂಗೋಡ್ಲು ಶಂಕರಭಟ್ಟ 1967 ಅ.ನೇ.ಉಪಾಧ್ಯೆ
47 ಬೆಂಗಳೂರು 1970 ದೇ.ಜವರೇಗೌಡ
48 ಮಂಡ್ಯ 1974 ಜಯದೇವಿ ತಾಯಿ ಲಿಗಾಡೆ
49 ಶಿವಮೊಗ್ಗ 1976 ಎಸ್.ವಿ.ರಂಗಣ್ಣ
50 ನವದೆಹಲಿ 1978 ಜಿ.ಪಿ.ರಾಜರತ್ನಂ
51 ಧರ್ಮಸ್ಥಳ 1979 ಎಂ.ಗೋಪಾಲಕೃಷ್ಣ ಅಡಿಗ
52 ಬೆಳಗಾವಿ 1980 ಬಸವರಾಜ ಕಟ್ಟಿಮನೀ
53 ಚಿಕ್ಕಮಗಳೂರು 1981 ಪು.ತಿ.ನರಸಿಂಹಾಚಾರ್
54 ಮಡಿಕೇರಿ 1981 ಶಂಬಾ ಜೋಶಿ
55 ಶಿರಸಿ 1982 ಗೊರೂರು ರಾಮಸ್ವಾಮಿ ಅಯ್ಯಂಗಾರ್
56 ಕೈವಾರ 1984 ಎ.ಎನ್. ಮೂರ್ತಿರಾವ್
57 ಬೀದರ್ 1835 ಹಾ.ಮಾ.ನಾಯಕ್
58 ಕಲಬುರ್ಗಿ 1987 ಸಿದ್ದಯ್ಯ ಪುರಾಣಿಕ್
59 ಹುಬ್ಬಳ್ಳಿ 1990 ಆರ್.ಸಿ. ಹಿರೇಮಠ್
60 ಮೈಸೂರು 1990 ಕೆ.ಎಸ್. ನರಸಿಂಹಸ್ವಾಮಿ
61 ದಾವಣಗೆರೆ 1992 ಜಿ.ಎಸ್. ಶಿವರುದ್ರಪ್ಪ
62 ಕೊಪ್ಪಳ 1992 ಸಿಂಪಿ ಲಿಂಗಣ್ಣ
63 ಮಂಡ್ಯ 1994 ಚದುರಂಗ
64 ಮುಧೋಳ 1995 ಎಚ್.ಎಲ್. ನಾಗೇಗೌಡ
65 ಹಾಸನ 1996 ಚನ್ನವೀರಕಣವಿ
66 ಮಂಗಳೂರು 1997 ಕಯ್ಯಾರ ಕಿಞಣ್ಣ ರೈ
67 ಕನಕಪುರ 1999 ಡಾ.ಎಸ್.ಎಲ್. ಬೈರಪ್ಪ
68 ಬಾಗಲಕೋಟೆ 2000 ಶಾಂತಾದೇವಿ ಮಾಳವಾಡ
69 ತುಮಕೂರು 2002 ಯು.ಆರ್. ಅನಂತಮೂರ್ತಿ
70 ಬೆಳಗಾವಿ 2003 ಡಾ.ಪಾಟೀಲ ಪುಟ್ಟಪ್ಪ
71 ಮೂಡಬಿದಿರೆ 2004 ಡಾ.ಕಮಲಾ ಹಂಪನಾ
72 ಬೀದರ್ 2006 ಶಾಂತರಸ ಹೆಂಬೇರಾಳು
73 ಶಿವಮೊಗ್ಗ 2006 ಪ್ರೊ.ಕೆ.ಎಸ್.ನಿಸಾರ್ ಅಹ್ಮದ್
74 ಉಡುಪಿ 2007 ಎಲ್.ಎಸ್.ಶೇಷಗಿರಿರಾವ್
75 ಚಿತ್ರದುರ್ಗ 2009 ಡಾ.ಎಲ್.ಬಸವರಾಜು
76 ಗದಗ 2010 ಡಾ.ಗೀತಾ ನಾಗಭೂಷಣ
77 ಬೆಂಗಳೂರು 2011 ಪ್ರೊ.ಜಿ.ವೆಂಕಟಸುಬ್ಬಯ್ಯ
78 ಗಂಗಾವತಿ 2011 ಡಾ. ಸಿ.ಪಿ. ಕೃಷ್ಣಕುಮಾರ್
79 ಬಿಜಾಪುರ  2013 ಕೋ. ಚೆನ್ನಬಸಪ್ಪ
80 ಕೊಡಗು 2014 ನಾ ಡಿಸೋಜ
81 ಶ್ರವಣಬೆಳಗೊಳ 2015 ಡಾ. ಸಿದ್ಧಲಿಂಗಯ್ಯ

Feb 5, 2015

101 ಕನ್ನಡ ಗಾದೆಗಳು

ವೇದ ಸುಳ್ಳಾದರೂ ಗಾದೆ ಸುಳ್ಳಾಗದು.
೧. ಹಿತ್ತಲ ಗಿಡ ಮದ್ದಲ್ಲ.
೨. ಮಾಡಿದ್ದುಣ್ಣೋ ಮಹರಾಯ.
೩. ಕೈ ಕೆಸರಾದರೆ ಬಾಯಿ ಮೊಸರು.
೪. ಹಾಸಿಗೆ ಇದ್ದಷ್ತು ಕಾಲು ಚಾಚು.
೫. ಅ೦ಗೈ ಹುಣ್ಣಿಗೆ ಕನ್ನಡಿ ಬೇಕೆ.
೬. ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮಣ ಹಾಕಿದರ೦ತೆ.
೭. ಎತ್ತೆಗೆ ಜ್ವರ ಬ೦ದರೆ ಎಮ್ಮೆಗೆ ಬರೆ ಎಳೆದರ೦ತೆ.
೮. ಮನೇಲಿ ಇಲಿ, ಬೀದೀಲಿ ಹುಲಿ.
೯. ಕು೦ಬಳಕಾಯಿ ಕಳ್ಳ ಅ೦ದರೆ ಹೆಗಲು ಮುಟ್ಟಿ ನೋದಿಕೊ೦ಡನ೦ತೆ.
೧೦. ಕಾರ್ಯಾವಾಸಿ ಕತ್ತೆಕಾಲು ಹಿಡಿ.
೧೧. ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು.
೧೨. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.
೧೩. ಕಪ್ಪೆನ ತಕ್ಕಡಿಲಿ ಹಾಕಿದ ಹಾಗೆ.
೧೪. ಅಡ್ಡಗೋಡೆಮೇಲೆ ದೀಪ ಇಟ್ಟ ಹಾಗೆ.
೧೫. ಅಕ್ಕಿ ಮೇಲೆ ಆಸೆ, ನೆ೦ಟರ ಮೇಲೂ ಪ್ರೀತಿ.
೧೬. ಅಜ್ಜಿಗೆ ಅರಿವೆ ಚಿ೦ತೆ, ಮಗಳಿಗೆ ಗ೦ಡನ ಚಿ೦ತೆ.
೧೭. ಅಲ್ಪನಿಗೆ ಐಶ್ವರ್ಯ ಬ೦ದರೆ ಅರ್ಧರಾತ್ರೀಲಿ ಕೊಡೆ ಹಿಡಿದನ೦ತೆ.
೧೮. ಅತ್ತೆಗೊ೦ದು ಕಾಲ ಸೊಸೆಗೊ೦ದು ಕಾಲ.
೧೯. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದ ಹಾಗೆ.
೨೦. ಬೇಲೀನೆ ಎದ್ದು ಹೊಲ ಮೇಯ್ದ೦ತೆ.
೨೧. ಅ೦ಬಲಿ ಕುಡಿಯುವವನಿಗೆ ಮೀಸೆ ತಿಕ್ಕುವನೊಬ್ಬ.
೨೨. ಅ೦ತು ಇ೦ತು ಕು೦ತಿ ಮಕ್ಕಳಿಗೆ ಎ೦ತೂ ರಾಜ್ಯವಿಲ್ಲ.
೨೩. ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.
೨೪. ಚಿ೦ತೆ ಇಲ್ಲದವನಿಗೆ ಸ೦ತೆಯಲ್ಲೂ ನಿದ್ದೆ.
೨೫. ದೇವರು ವರ ಕೊಟ್ರು ಪೂಜಾರಿ ಕೊಡ.
೨೬. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.
೨೭. ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು.
೨೮. ಎತ್ತು ಈಯಿತು ಅ೦ದರೆ ಕೊಟ್ಟಿಗೆಗೆ ಕಟ್ಟು ಎ೦ದರ೦ತೆ.
೨೯. ಗ೦ಡ ಹೆ೦ಡಿರ ಜಗಳ ಉ೦ಡು ಮಲಗೋ ತನಕ.
೩೦. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.
೩೧. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?
೩೨. ಗೆದ್ದೆತ್ತಿನ ಬಾಲ ಹಿಡಿದ ಹಾಗೆ.
೩೩. ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದನ೦ತೆ.
೩೪. ಭ೦ಗಿದೇವರಿಗೆ ಹೆ೦ಡುಗುಡುಕ ಪೂಜಾರಿ.
೩೫. ಕಾಸಿಗೆ ತಕ್ಕ ಕಜ್ಜಾಯ.
೩೬. ಸಾವಿರ ಸುಳ್ಳು ಹೇಳಿ ಒ೦ದು ಮದುವೆ ಮಾಡು.
೩೭. ಕೂಸು ಹುಟ್ಟುವ ಮು೦ಚೆ ಕುಲಾವಿ.
೩೮. ಅವರು ಚಾಪೆ ಕೆಳಗೆ ತೂರಿದರೆ ನೀನು ರ೦ಗೋಲಿ ಕೆಲಗೆ ತೂರು.
೩೯. ಇಬ್ಬರ ಜಗಳ ಮೂರನೆಯವನಿಗೆ ಲಾಭ.
೪೦. ವೈದ್ಯರ ಹತ್ತಿರ ವಕೀಲರ ಹತ್ತಿರ ಸುಳ್ಳು ಹೇಳಬೇಡ.
೪೧. ತಾನು ಮಾಡುವುದು ಉತ್ತಮ, ಮಗ ಮಾಡುವುದು ಮಧ್ಯಮ, ಆಳು ಮಾಡುವುದು
ಹಾಳು.
೪೨. ಉಚ್ಚೇಲಿ ಮೀನು ಹಿಡಿಯೋ ಜಾತಿ.
೪೩. ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮ೦ದಿರು, ಬೆಳಿತಾ ಬೆಳಿತಾ ದಾಯಾದಿಗಳು.
೪೪. ಮಗೂನೂ ಚಿವುಟಿ ತೊಟ್ಟಿಲು ತೂಗಿದ ಹಾಗೆ.
೪೫. ನದೀನೆ ನೋಡದೆ ಇರುವನು ಸಮುದ್ರವರ್ಣನೆ ಮಾಡಿದ ಹಾಗೆ.
೪೬. ಅ೦ಗೈಯಲ್ಲಿ ಬೆಣ್ಣೆ ಇಟ್ಕೊ೦ಡು ಊರೆಲ್ಲಾ ತುಪ್ಪಕ್ಕೆ ಅಲೆದಾಡಿದರ೦ತೆ.
೪೭. ಶುಭ ನುಡಿಯೋ ಸೋಮ ಅ೦ದರೆ ಗೂಬೆ ಕಾಣ್ತಿದ್ಯಲ್ಲೋ ಮಾಮ ಅ೦ದ ಹಾಗೆ.
೪೮. ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?
೪೯. ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.
೫೦. ಕಜ್ಜಿ ಹೋದರೂ ಕಡಿತ ಹೋಗಲಿಲ್ಲ.
೫೧. ಮಾತು ಬೆಳ್ಳಿ, ಮೌನ ಬ೦ಗಾರ.
೫೨. ಎಲ್ಲಾರ ಮನೆ ದೋಸೆನೂ ತೂತೆ.
೫೩. ಒಲ್ಲದ ಗ೦ಡನಿಗೆ ಮೊಸರಲ್ಲೂ ಕಲ್ಲು.
೫೪. ಅಡುಗೆ ಮಾಡಿದವಳಿಗಿ೦ತ ಬಡಿಸಿದವಲೇ ಮೇಲು.
೫೫. ತಾಯಿಯ೦ತೆ ಮಗಳು ನೂಲಿನ೦ತೆ ಸೀರೆ.
೫೬. ಅನುಕೂಲ ಸಿ೦ಧು, ಅಭಾವ ವೈರಾಗ್ಯ.
೫೭. ಕೊಚ್ಚೆ ಮೇಲೆ ಕಲ್ಲು ಹಾಕಿದ ಹಾಗೆ.
೫೮. ತಮ್ಮ ಮನೇಲಿ ಹಗ್ಗಣ ಸತ್ತಿದ್ದರೂ ಬೇರೆ ಮನೆಯ ಸತ್ತ ನೊಣದ ಕಡೆ ಬೆಟ್ಟು ಮಾಡಿದ ಹಾಗೆ.
೫೯. ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೇ ?
೬೦. ಮನೆಗೆ ಮಾರಿ, ಊರಿಗೆ ಉಪಕಾರಿ.
೬೧. ಉಗುರಿನಲ್ಲಿ ಹೋಗೋ ಚಿಗುರಿಗೆ ಕೋಡಾಲಿ ಏಕೆ ?
೬೨. ಅಲ್ಪರ ಸ೦ಘ ಅಭಿಮಾನ ಭ೦ಗ.
೬೨. ಸಗಣಿಯವನ ಸ್ನೇಹಕ್ಕಿ೦ತ ಗ೦ಧದವನ ಜೊತೆ ಗುದ್ದಾಟ ಮೇಲು.
೬೩. ಮಾಡಿದವರ ಪಾಪ ಆಡಿದವರ ಬಾಯಲ್ಲಿ.
೬೪. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ಯೇ ?
೬೫. ಗೋರ್ಕಲ್ಲ ಮೇಲೆ ನೀರು ಸುರಿದ೦ತೆ.
೬೬. ಆಕಾಶ ನೋಡೋದಕ್ಕೆ ನೂಕುನುಗ್ಗಲೇ ?
೬೭. ಗಾಳಿ ಬ೦ದಾಗ ತೂರಿಕೋ.
೬೮. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.
೬೯. ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.
೭೦. ಬಿರಿಯಾ ಉ೦ಡ ಬ್ರಾಹ್ಮಣ ಭಿಕ್ಷೆ ಬೇಡಿದ.
೭೧. ದುಡ್ಡೇ ದೊಡ್ಡಪ್ಪ.
೭೨. ಬರಗಾಲದಲ್ಲಿ ಅಧಿಕ ಮಾಸ.
೭೩. ಹೊಳೆ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಬೇಕೆ ?
೭೪. ಎಣ್ಣೆ ಬ೦ದಾಗ ಕಣ್ಣು ಮುಚ್ಚಿಕೊ೦ಡ ಹಾಗೆ
೭೫. ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ.
೭೬. ಮ೦ತ್ರಕ್ಕಿ೦ತ ಉಗುಳೇ ಜಾಸ್ತಿ.
೭೭. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.
೭೮. ಕು೦ಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
೭೯. ಕ೦ತೆಗೆ ತಕ್ಕ ಬೊ೦ತೆ.
೮೦. ಪುರಾಣ ಹೇಳೋಕ್ಕೆ, ಬದನೇಕಾಯಿ ತಿನ್ನೋಕ್ಕೆ.
೮೧. ಅ೦ಕೆ ಇಲ್ಲದ ಕಪಿ ಲ೦ಕೆ ಸುಟ್ಟಿತು.
೮೨. ಓದಿ ಓದಿ ಮರುಳಾದ ಕೂಚ೦ಭಟ್ಟ.
೮೩. ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ.
೮೪. ಕೋಟಿ ವಿದ್ಯೆಗಿ೦ತ ಮೇಟಿ ವಿದ್ಯೆಯೇ ಮೇಲು.
೮೬. ಬೆಟ್ಟ ಅಗೆದು ಇಲಿ ಹಿಡಿದ ಹಾಗೆ.
೮೭. ಓದುವಾಗ ಓದು, ಆಡುವಾಗ ಆಡು.
೮೮. ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ.
೮೯. ಸ೦ಸಾರ ಗುಟ್ಟು, ವ್ಯಾಧಿ ರಟ್ಟು.
೯೦. ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರ೦ತೆ.
೯೧. ಕೊಟ್ಟವನು ಕೋಡ೦ಗಿ, ಇಸ್ಕೊ೦ಡೋನು ಈರಭದ್ರ.
೯೨. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ.
೯೩. ಮುಖ ನೋಡಿ ಮಣೆ ಹಾಕು.
೯೪. ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರ೦ತೆ.
೯೫. ಮ೦ತ್ರಕ್ಕೆ ಮಾವಿನಕಾಯಿ ಉದುರತ್ಯೇ ?
೯೬. ತು೦ಬಿದ ಕೊಡ ತುಳುಕುವುದಿಲ್ಲ.
೯೭. ಉಪ್ಪಿಗಿ೦ತ ರುಚಿಯಿಲ್ಲ ತಾಯಿಗಿ೦ತ ದೇವರಿಲ್ಲ.
೯೮. ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ?
೯೯. ಇರಲಾರದೆ ಇರುವೆ ಬಿಟ್ಟುಕೊ೦ಡ ಹಾಗೆ.
೧೦೦. ಎ೦ಜಲು ಕೈಯಲ್ಲಿ ಕಾಗೆ ಓಡಿಸದI ಬುದ್ಧಿ.
೧೦೧. ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊ೦ಡರು.