Nov 19, 2011

ಪ್ರಶ್ನೋತ್ತರ ಮಾಲಿಕೆ - 10

1. ಸಣ್ಣ ಕಥೆಗಳ ಜನಕ ಎಂದುಮಾಸ್ತಿ ವೆಂಕಟೇಶ ಅಯ್ಯಂಗಾರ್ರವರನ್ನ ಕರೆಯುತ್ತಾರೆ.


2. ಬಾಣನಕಾದಂಬರಿಕೃತಿಯ ಆಧಾರದಿಂದ ಕನ್ನಡದ ಒಂದನೇ ನಾಗವರ್ಮನು ಚಂಪೂ ಶಾಲಿಯಲ್ಲಿಕರ್ನಾಟಕ ಕಾದಂಬರಿಯನ್ನು ರಚಿಸಿದರು.

3.  ರಾಮಾಯಣವನ್ನು ರಚಿಸಿದ ಮಹರ್ಷಿ ಎಂದುವಾಲ್ಮಿಕಿಕವಿಯನ್ನ ಕರೆಯುತ್ತಾರೆ.


4. ನಾಮಪದ ಕ್ರಿಯಾಪದಗಳಂತೆ ಲಿಂಗ ವಚನ ವಿಭಕ್ತಿಗಳಿಂದ ರೂಪಭೇದವನ್ನು ಹೊಂದದೇ ಏಕರೂಪವಾಗಿರುವ ಶಬ್ದಗಳಿಗೆಅವ್ಯಯಗಳುಎಂದು ಕರೆಯುವರು.

5. ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಏಪ್ರಿಲ್ 2 ”.

6. ಸೂರ್ಯ ಉದಯಿಸುವ ನಾಡು ಎಂದುಜಪಾನ್”.

7. ಕರ್ನಾಟಕದಲ್ಲಿ ಸುಮಾರು 300 – 320 ರಷ್ಟು ಹುಲಿಗಳಿದ್ದು ದೇಶದಲ್ಲಿಯೆ ಹೆಚ್ಚು ಸಂಖ್ಯೆಯ ಹುಲಿಗಳನ್ನು ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

8. ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.

9. ಬಂಡೀಪುರ ಉದ್ಯಾನವನ- ಕರ್ನಾಟಕ ಮತ್ತು ತಮಿಳು ನಾಡಿನ ಗಡಿ ಪ್ರದೇಶ.

10.ರಿಜರ್ವ್ ಬ್ಯಾಂಕ್ ಆಪ್ ಇಂಡಿಯಾ - ಸ್ಥಾಪನೆ :ಎಪ್ರಿಲ್ 1, 1935 ( ಜನವರಿ 1, 1949 ರಂದು ರಾಷ್ಟ್ರೀಕರಣ ಗೊಳಿಸಲಾಯಿತು. )